ರಾಷ್ಟ್ರೀಯ ಸುದ್ದಿಗಳುವಿದೇಶಿ ಸುದ್ದಿಗಳು

ಕುವೈತ್‌ನ ರಾಜಕುಮಾರರೊಂದಿಗೆ ಪ್ರಧಾನಮಂತ್ರಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್‌ನ ರಾಜಕುಮಾರ ಘನತೆವೆತ್ತ ಶೇಖ್‌ ಸಭಾ ಅಲ್‌-ಖಾಲೆದ್‌ ಅಲ್‌-ಹಮದ್‌ ಅಲ್‌-ಮುಬಾರಕ್‌ ಅಲ್‌-ಸಬಾಹ್‌ ಅವರೊಂದಿಗೆ ಫಲಪ್ರದ ದೂರವಾಣಿ ಸಂಭಾಷಣೆ ನಡೆಸಿದರು.

ಸಂಭಾಷಣೆಯ ವೇಳೆ, ಭಾರತವು ಕುವೈತ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಖಂಡಿಸುತ್ತದೆ ಮತ್ತು ಈ ಸಂಕಷ್ಟದ ಸಮಯದಲ್ಲಿ ಕುವೈತ್‌ ಜನರೊಂದಿಗೆ ನಿಲ್ಲುತ್ತದೆ ಎಂದು ತಿಳಿಸಿದರು.

ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು.

ಕುವೈತ್‌ನಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿ ಪಡಿಸುವಲ್ಲಿ ಕುವೈತ್‌ ನಾಯಕತ್ವದ ನಿರಂತರ ಬೆಂಬಲವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ;

‘‘ಕುವೈತ್‌ನ ರಾಜಕುಮಾರ ಘನತೆವೆತ್ತ ಶೇಖ್‌ ಸಬಾಹ್‌ ಅಲ್‌-ಖಾಲೆದ್‌ ಅಲ್‌-ಹಮದ್‌ ಅಲ್‌-ಮುಬಾರಕ್‌ ಅಲ್‌-ಸಬಾಹ್‌ ಅವರೊಂದಿಗೆ ಫಲಪ್ರದ ದೂರವಾಣಿ ಸಂಭಾಷಣೆ ನಡೆಸಿದೆ. ಕುವೈತ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಭಾರತ ಖಂಡಿಸುತ್ತದೆ ಮತ್ತು ಈ ಕಷ್ಟದ ಸಮಯದಲ್ಲಿ ತನ್ನ ಜನರೊಂದಿಗೆ ನಿಲ್ಲುತ್ತದೆ.

ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ನಾವು ಒತ್ತಿಹೇಳಿದ್ದೇವೆ. ಕುವೈತ್‌ನಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕುವೈತ್‌ ನಾಯಕತ್ವದ ನಿರಂತರ ಬೆಂಬಲವನ್ನು ಶ್ಲಾಘಿಸಿದೆ.’’ 

Leave a Reply

Your email address will not be published. Required fields are marked *